ಗಂಗಾ ಕಲ್ಯಾಣ ಯೋಜನೆ 2026 –  ಸರ್ಕಾರದಿಂದ ಎಲ್ಲಾ ರೈತರಿಗೆ ಉಚಿತ ಬೋರ್ ವೆಲ್ ಸಬ್ಸಿಡಿ.

ಬೋರ್ ವೆಲ್ ಕೊರೆಯುವುದು ಅಥವಾ ಕೊಳವೆ ಬಾವಿ ಕೊರೆಯುವ ಮೂಲಕ ಸರ್ಕಾರ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯಲ್ಲಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಗಂಗಾ ಕಲ್ಯಾಣ ಯೋಜನೆ ಈ ಯೋಜನೆ ಅಡಿಯಲ್ಲಿ ಎಲ್ಲಾ ರೈತರಿಗೆ ಉಚಿತ ಸಬ್ಸಿಡಿ ದೊರೆಯುತ್ತದೆ. ಹಾಗಾದರೆ ರೈತರು ಇದರ ಅನುಕೂಲವನ್ನು ಹೇಗೆ ಪಡೆಯಬೇಕು? , ಏನೇನು ಮಾಡದಂಡಗಳಿವೆ? ಎಂಬುದನ್ನು ವಿವರವಾಗಿ ನೋಡೋಣ.

01. ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ:

> ಒಂದು ಅಥವಾ ಎರಡು ಎಕರೆಗಳಷ್ಟು ಭೂಮಿಯನ್ನು ಹೊಂದಿರುವ ರೈತರಿಗೆ ಈ ಯೋಜನೆ ಅಡಿಯಲ್ಲಿ 3.75 ಲಕ್ಷ ಸಬ್ಸಿಡಿ ಮತ್ತು 50,000 ಸಾಲವನ್ನು ಯೋಜನೆ ಅಡಿಯಲ್ಲಿ ದೊರೆಯುತ್ತದೆ.

> ಅಂದರೆ ಸಬ್ಸಿಡಿಯನ್ನು ಹೊರತುಪಡಿಸಿ ಉಳಿದ ಐವತ್ತು ಸಾವಿರಕ್ಕೆ ವಾರ್ಷಿಕ 4% ಬಡ್ಡಿ ಇರುತ್ತದೆ.

02. ಸಾಮೂಹಿಕ ನೀರಾವರಿ ಕೊಳವೆ ಬಾವಿ ಯೋಜನೆ:

> ಈ ಯೋಜನೆಯು ಪ್ರವರ್ಗ-1, 2 ಎ, 3 ಎ ಮತ್ತು 3ಬಿ ಗೆ ಅನ್ವಯವಾಗುತ್ತದೆ.

> ಕನಿಷ್ಠ ಮೂರು ಸಣ್ಣ ಅಥವಾ ಅತಿ ಸಣ್ಣ ರೈತರಿಗೆ 8 ಎಕರೆ ಅಥವಾ ಅದಕ್ಕಿಂತ ಜಾಸ್ತಿ ಇರುವ ಕೃಷಿ ಭೂಮಿಗೆ ಈ ಯೋಜನೆ ಸಹಾಯವಾಗುತ್ತೆ.

03. ಸಾಮೂಹಿಕ ನೀರಾವರಿ ಸೌಲಭ್ಯ.

> ಇದರಿಂದ 08ರಿಂದ 15 ಎಕರೆ ಹೊಂದಿರುವ ಘಟಕಗಳಿಗೆ 4 ಲಕ್ಷ ಸಬ್ಸಿಡಿ (ಸಹಾಯಧನ) ಎರಡು ಕೊಳವೆಬಾವಿ ದೊರೆಯುತ್ತದೆ.

> ಎಕರೆ ಜಮೀನು ಬಂದಿರುವಂತಹ ಘಟಕಗಳಿಗೆ 06  ಲಕ್ಷಗಳ ವೆಚ್ಚದಲ್ಲಿ ಮೂರು ಕೊಳವೆ ಭಾವಿಗಳು ದೊರೆಯುತ್ತದೆ.

04. ಸಾಮೂಹಿಕ ಏತ ನೀರಾವರಿ ಯೋಜನೆ.

> ಯೋಜನೆ ಅಡಿಯಲ್ಲಿ 2 ಲಕ್ಷ ಸಹಾಯಧನ  50,000 ಸಾಲ ದೊರೆಯುತ್ತದೆ.

> ಸಾಲ ಮರುಪಾವತಿ ಅವಧಿ 03 ವರ್ಷಗಳ ವರೆಗೆ ಇರುತ್ತದೆ, 04% ಬಡ್ಡಿ.

  • ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು. 
  • ಪ್ರವರ್ಗ-1, 2 ಎ, 3 ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು.
  • ವಯಸ್ಸು 18  ರಿಂದ 55 ವರ್ಷ.
  • ರಾಜ್ಯದ  ಕಾಯಂ ನಿವಾಸಿಯಾಗಿರಬೇಕು.
  • ಕುಟುಂಬದ ಆದಾಯವು ವಾರ್ಷಿಕವಾಗಿ 96,000 ಒಳಗೆ ಇರಬೇಕು.
  • ಫಲಾನುಭವಿಗಳ ಒಂದು ಎಕರೆ  20 ಗುಂಟೆ ಯಿಂದ 5 ಎಕರೆಗಳ ವರೆಗೆ  ಒಣ ಭೂಮಿಯನ್ನು ಹೊಂದಿರಬೇಕು.
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ 
  • ಆಧಾರ್  ಕಾರ್ಡ್ ಪ್ರತಿ
  • RTC ಪ್ರತಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಭೂ ಕಂದಾಯ ಪಾವತಿಯ ರಸೀದಿ
  • ಸ್ವಯಂ ಘೋಷಣ ಪತ್ರ
  • ಖಾಸಗಿದಾರರ ಸ್ವಯಂ ಘೋಷಣ ಪತ್ರ
  • ಭಾವಚಿತ್ರ

ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.ಇದರ ಸದುಪಯೋಗ ಪಡಿಸಿಕೊಳ್ಳಿ.

Leave a Comment